ಭಗತಸಿಂಗ ಮತ್ತು ಸಾವು

ಕರಾಳ ರಾಕ್ಷಸರ ಹೊಟ್ಟೆ ಹರಿದು
ಹೊರಗೆ ಬಾ ಭಗತಸಿಂಗ,
ಹೆಣ್ಣಿಗಾಗಿ ಸತ್ತವರ ಕಂಡೆ
ಹೊನ್ನಿಗಾಗಿ ಹೋರಾಡಿದವರ ಕಂಡೆ
ಮಣ್ಣಿಗಾಗಿ ಮಡಿದವರ ಕಂಡೆ,
ಆದರೆ ನಿನ್ನಂತಹ ವೀರನನ್ನು
ಕಾಣಲಿಲ್ಲ ಬಿಡು ಧೀರ.

ಸಾವು ಬಾಗಿಲಲಿ ನಿಂತು
ಕೈ ಬೀಸಿ ಕರೆದಾಗ
ಇಸಂಗಳ ಬಗ್ಗೆ ನಾನಿನ್ನೂ
ಅಭ್ಯಾಸ ಮಾಡಿ ಬರುತ್ತೇನೆ
ಹೋಗು ನಿನಗೆ
ಬೇರೆ ಕೆಲಸವಿಲ್ಲವೇ?
ಎಂದು ಸಾವನ್ನು ದೂರಕಟ್ಟಿದ
ನೀನು ಸಾಯಲಿಲ್ಲ ಬಿಡು ಧೀರ.

ನಿನ್ನ ಕೆಚ್ಚು, ಸ್ವಾಭಿಮಾನಗಳು
ಇಂದಿಗೂ ಸ್ಫೂರ್ತಿಯ ಸೆಲೆಗಳು
ಪರದೇಶಿ ಬಿಳಿಯರಿಗೆ ಸಲಾಮು
ಹೊಡೆಯದ ನೀನೇ
ನಿಜವಾದ ದೇಶಭಕ್ತ.

ಇತಿಹಾಸದ ಪುಟ ಪುಟಗಳಲ್ಲಿಯೂ
ಗಾಂಧಿ, ಗಾಂಧಿಗಳೇ ತುಂಬಿರುವಾಗ,
ಸಂದಿ ಗೊಂದಿಗಳಲ್ಲೂ ನಿನಗೆ
ಸೇರಲು ಜಾಗವಿಲ್ಲದಂತೆ ಮಾಡಿದರು.

ಕುಟಿಲ ಕಾರಸ್ಥಾನಕ್ಕಿಳಿಯದ ನೀನು
ಜನತೆಯ ನಿಜವಾದ ಸ್ನೇಹಿತ
ನಿಜವಾದ ಸ್ವಾತಂತ್ರ್ಯದ ವ್ಯಾಖ್ಯಾನಕಾರ
ನೀನು ಮರಳಿ ಬಾ ಧೀರ,
ಕತ್ತಲೆ ರಾಕ್ಷಸನ ಹೊಟ್ಟೆ ಹರಿದು
ಹೊರಗೆ ಬಾ ವೀರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶುದ್ಧವಾಗಲಿ ಅಂತರಂಗ
Next post ಹೆತ್ತು ಹೊತ್ತಾದರೂ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys